Tuesday, 16 October 2018

ಕನ್ನಡ ಸಾಹಿತ್ಯ

ಕನ್ನಡ ಸಾಹಿತ್ಯ
1) ಕನ್ನಡದ ಕಾವ್ಯ ಪಿತಾಮಹ ಯಾರು.?
☄ ಪಂಪ
2) ರನ್ನನ ನಾಟಕೀಯ ಕಾವ್ಯ ಯಾವುದು,?
☄ ಗದಾಯುದ್ಧ
3) ನಾಡೋಜ ಪಂಪ ಕೃತಿಯ ಕರ್ತೃ ಯಾರು.?
☄ ಮುಳಿಯ ತಿಮ್ಮಪ್ಪಯ್ಯ
4) ಪಂಪನ ಲೌಕಿಕ ಕಾವ್ಯ ಯಾವುದು.?
☄ವಿಕ್ರಮಾರ್ಜುನ ವಿಜಯ
5) ಪಂಪ ಭಾರತದಲ್ಲಿ ವರ್ಣಿತವಾಗಿರುವ ಸರೋವರ ಯಾವುದು.?
☄ವೈಶಂಪಾಯನ
6) ಪಂಪಭಾರತದಲ್ಲಿ " ನೆತ್ತಮನಾಡಿ ,ಭಾನುಮತಿ ಸೋಲ್ತೋಡೆ
...ಮುತ್ತಿನ ಕೇಡನೆ ನೋಡಿ ನೋಡಿ ಬಳುತ್ತಿವೆ.," ಈ ಮಾತು ಯಾರ
ಸ್ನೇಹದ ಸಂಕೇತವಾಗಿದೆ..?
☄ ಕರ್ಣ -ದುರ್ಯೋಧನ
7) ಹಿತಮಿತ ಮೃದು ವಚನ ,ಪ್ರಸನ್ನ
ಗಂಭೀರವದನ ರಚನ ಚತುರ '' ಯಾರ ಶೈಲಿ
ಯಾಗಿದೆ..?
☄ ಪಂಪ
8) ಪಂಪ ಭಾರತದಲ್ಲಿ ಕೊನೆಯಲ್ಲಿ
ಅರ್ಜುನನೊಡನೆ ಪಟ್ಟಕ್ಕೇರುವಳು ಯಾರು,?
☄ ಸುಭದ್ರೆ
9) " ಬೆಳಗುವೆನಿಲ್ಲಿ ಲೌಕಿಕವನಲ್ಲಿ ಜಿನಾಗಮಂ " ಎಂಬ
ಉಕ್ತಿ ಬರುವ ಕಾವ್ಯ,?
☄ ಪಂಪ ಭಾರತ
10) " ಕರ್ಣರಸಾಯನ ಮಲ್ತೆ ಭಾರತಂ " ಎಂಬ ಉಕ್ತಿ
ಬರುವ ಕಾವ್ಯ ಯಾವುದು..?
☄ಪಂಪ ಭಾರತ
11) ಪಂಪ ಭಾರತದಲ್ಲಿ ಬರುವ
"ಅತ್ಯುನ್ನತಿಯೊಳಮ
ಂ ಸಿಂಧೂದ್ಭವಮಂ " ಎಂದರೆ ಯಾರನ್ನು
ಕರೆಯುತ್ತಾರೆ .?
☄ ಭೀಷ್ಮ
12) " ಭೇದಿಸಲೆಂದು ದಲ್ ನುಡಿದರೆನ್ನದಿರೊಯ
್ಯನೆ " ಎಂಬ ಕೃಷ್ಣ ಯಾರ ಕುರಿತು ಹೇಳಿದ್ದಾನೆ..?
☄ಕರ್ಣ
13) " ಪಿಡಿಯೆಂ ಚಕ್ರವನೆಂಬ ಚಕ್ರಯ
ನಿಳಾಚಕ್ರಂ ಭಯಂಗೊಳ್ವಿನಂ "
ಎಂದು ತನ್ನ ಕಾರ್ಯ ತಿಳಿಸಿದವರು ಯಾರು,?
☄ ಭೀಷ್ಮ
14) " ಪಗೆವರ ನಿಟ್ಟೆಲ್ವಂ ಮುರಿವೊಡೆಗೆ
ಪಟ್ಟಂಗಟ್ಟಾ " ಎಂದು ಹೇಳಿದವರು..?
☄ ಕರ್ಣ
15) ಪಂಪನ ಯಾವ ಕೃತಿ ಮೂರು ತಿಂಗಳಲ್ಲಿ
ರಚನೆಯಾಗಿದೆ,?
☄ ಪಂಪ ಭಾರತ
16) " ಕತೆ ಪಿರಿದಾದೊಡಂ ಕತೆಯ
ಮೆಯ್ಗಿಡಲೀಯದೆ " ರಚಿತವಾದ ಪಂಪನ ಕಾವ್ಯ
ಯಾವುದು,?
☄ ಪಂಪ ಭಾರತ
17) ಪಂಪ ಭಾರತದಲ್ಲಿರುವ ಒಟ್ಟು ಆಶ್ವಾಸಗಳು .?
☄14 ಆಶ್ವಾಸಗಳು
18) " ಪಂಪ ಕನ್ನಡ ಕಾಳಿದಾಸ " ಎಂದು ಹೇಳಿದವರು,?
☄ ತಿ.ನಂ.ಶ್ರೀ
19) ಸೂಲ್ ಪಡೆಯಲಪ್ಪುದು ಕಾಣ
ಮಹಾಜಿರಂಗದೊಳ್ ಎಂಬ ವಾಕ್ಯ
ಪಂಪನ ಯಾವ ಕಾವ್ಯದಲ್ಲಿದೆ ,?
☄ ಪಂಪ ಭಾರತ
20) " ಸಂಸ್ಕೃತ ಸಾಹಿತ್ಯಕ್ಕೆ ಆದಿಕವಿ ವಾಲ್ಮೀಕಿ
ಆದಂತೆ ಕನ್ನಡ ಆದಿಕವಿ ಪಂಪ " ಈ ಮಾತನ್ನು
ಹೇಳಿದವರು ಯಾರು.?
☄ ಟಿ.ಎಸ್.ವೆಂಕಣಯ್ಯ
21) " ಓಲೈಸಿ ಬಾಳುವುದೇ ಕಷ್ಟಂ ಇಳಾಧಿನಾಧರಂ " ಈ
ಮಾತನ್ನು ಹೇಳಿದ ಕವಿ ಯಾರು.?
☄ಪಂಪ
22) ವಿಕ್ರಮಾರ್ಜುನ ವಿಜಯದ ಮೂಲ ಆಕರ ಗ್ರಂಥ
ಯಾವುದು.?
☄ ವ್ಯಾಸ ಭಾರತ
23) ರನ್ನನನ್ನು ಶಕ್ತಿ ಕವಿ ಎಂದು ಕರೆದವರು ಯಾರು.?
☄ ಕುವೆಂಪು
24) " ನಿನ್ನಂ ಪೆತ್ತಳ್ ವೊಲೆವೊತ್ತಳೆ
ವೀರ ಜನನಿವೆಸಂ ವೆತ್ತಳ್ " ಎಂಬ
ಕಾವ್ಯವನ್ನು ದುರ್ಯೋಧನ ಯಾರನ್ನು ಕುರಿತು ಹೇಳಿದ್ದಾನೆ,?
☄ ಕರ್ಣ
25) ರನ್ನ ತನ್ನ ಗದಾಯುದ್ಧವನ್ನು ಯಾರನ್ನು
ಸಮೀಕರಿಸಿ ಹೇಳಿದ್ದಾನೆ,?
☄ಸತ್ಯಾಶ್ರಯ ಇರಿವ ಬೆಡಂಗ
26) " ನೆಲಕಿರಿವೆನೆಂದು ಬಗೆದರೆ.? ಛಲಕಿರಿವೆಂ
ಪಾಂಡು ಸುತರೋಳಿ ಕೋಲ್ಲಿಸಿದ ನೆಲನಿದು ಪಾಳ್ನೆಲನೆನಗೆ "
ಎಂಬ ಸಾಲು ಬರುವ ಕಾವ್ಯ ಯಾವುದು.?
☄ಗದಾಯುದ್ಧ (ದುರ್ಯೋಧನ)
27) ಸಾಹಿತ್ಯ ಸಂಶೋಧನ ಕೃತಿಯಲ್ಲಿ " ಭೀಮನೇ
ನಾಯಕ ರೌದ್ರವೇ " ಮುಖ್ಯ ರಸ ಎಂದವರು ..?
☄ದ.ರಾ.ಬೇಂದ್ರೆ
28) ರನ್ನನು ಸಿಂಹಾವಲೋಕನ ಕ್ರಮದಿಂದ ಬರೆದ
ಕಾವ್ಯ ಯಾವುದು,?
☄ ಗದಾಯುದ್ಧ
29) " ಕೃತಿ ಪರೀಕ್ಷಿಪಂಗೆಂಟೆರ್ದೆಯೆ "
ಎಂದು ಸವಾಲು ಹಾಕಿದ ರನ್ನನ ಕೃತಿ ಯಾವುದು..?
☄ಗದಾಯುದ್ಧ
30) 'ರನ್ನ ವರ ಕವಿ , ಚಿರಕವಿ ಮತ್ತು ಮಹಾಕವಿಯಾಗಿ
ನಿಂತಿದ್ದಾನೆ ' ಈ ಹೇಳಿಕೆಯನ್ನು ನೀಡಿರುವವರು..?
☄ ಬಿ.ಎಂ.ಶ್ರೀ
31) " ನಾಟಕೀಯತೆಯಲ್ಲಿ ರನ್ನನು
ಪಂಪನಿಗಿಂತಲೂ ಒಂದು ಕೈ ಮೇಲು " ಎಂದು
ಹೇಳಿದವರು .?
☄ರಂ.ಶ್ರೀ.ಮುಗಳಿ
32) ಜೋಳದ ಪಾಳಿ ಎಂದರೆ..?
☄ ಅನ್ನದ ಹಂಗು(ಋಣ)
33) " ನೀರೊಳಗಿರ್ದುಂ
ಬೆಮರ್ತನುರಗಪತಾಕಂ " ಎಂಬ ಉಕ್ತಿ ಬರುವ ಕೃತಿ..?
☄ ಗದಾಯುದ್ಧ
34) ಗದಾಯುದ್ಧ ಸಂಗ್ರಹ ಕೃತಿ ಬರೆದ ಕವಿ ಯಾರು.?
☄ ತಿ.ನಂ.ಶ್ರೀ
35) ರನ್ನನ ದುರ್ಯೋಧನ ಮಹಾನುಭಾವ ಎಂದವರು ಯಾರು,?
☄ಅನಂತ ರಂಗಚಾರ್
1) ಕನ್ನಡದ ಆದಿ ವ್ಯಾಕರಣಕಾರ ಯಾರು.?
2ನೇ ನಾಗವರ್ಮ
2) " ಛಂದಸ್ಸು ಕವಿಯ ಕಣ್ಣಿನ ಬೆಳಕು "ಎಂದು
ಹೇಳಿದವರು.?
1ನೇ ನಾಗವರ್ಮ
3) ಛಂದಸ್ಸು ಎಂದರೆ..?
ಪದ್ಯಾರಚನ ಶಾಸ್ತ್ರ
4) ಕನ್ನಡ ಛಂದಸ್ಸಿಗೆ ಮಾತ್ರಾಗಣ ಯಾವ ಭಾಷೆಯ
ಕೊಡುಗೆ ಯಾಗಿದೆ..?
ಪ್ರಾಕೃತ
5) ಕನ್ನಡದಲ್ಲಿ ಮೊಟ್ಟ ಮೊದಲ
ಪ್ರಾಸಬಿಟ್ಟು ಕಾವ್ಯ ರಚಸಿದವರು...?
ಗೋವಿಂದ ಪೈ
6) " ಬ್ರಹ್ಮ ಗಣ " ವನ್ನು ಜಯಕೀರ್ತಿ
ಹೀಗೆ ಕರೆದಿದ್ದಾರೆ..?
ರತಿ
7) ವಡಿಯ ಪ್ರಸ್ತಾಪ ಕನ್ನಡದಲ್ಲಿ ಮೊದಲಿಗೆ
ಮಾಡಿದ ಕೃತಿ ಯಾವುದು..?
ಕವಿ ಜಿಹ್ವಾಬಂಧನ
8) ಕಂದ ಪದ್ಯದ ಎಷ್ಟನೇ ಗಣದ ಮೇಲೆ ' ಯತಿ '
ಬರುತ್ತದೆ..?
6ನೇ ಗಣ
9) ಸಂಸ್ಕೃತದ ಆರ್ಯಾಗೀತಿ ; ಪ್ರಾಕೃತದ '
ಸ್ಕಂಧಕ 'ಎಂದಕ್ಕೆ ಕನ್ನಡ ಸಂವಾದ ಪದ ಯಾವುದು,?
ಕಂದ ಪದ್ಯ
10) " ಖ್ಯಾತ ಕರ್ನಾಟಕ ವೃತ್ತಗಳು " ಎಂದು ಹೆಸರಿಸಿದವರು
.?
1ನೇ ನಾಗವರ್ಮ
21) ಅಚ್ಚಗನ್ನಡ ಛಂದಸ್ಸಿನ ಹತ್ತು ಮಟ್ಟುಗಳಲ್ಲಿ
ಮೊದಲನೆಯದು,?
ಮದನವತಿ
22) ಗೀತಿಕೆಯ ಮೊದಲ ಪ್ರಯೋಗ ಕಂಡು
ಬರುವ ಕೃತಿ ಯಾವುದು.. ?
ಕವಿರಾಜಮಾರ್ಗ
23) ಪೊಸಗನ್ನಡದಿಂ ವ್ಯಾವರ್ಣಿಸುವೆಂ
ಸತ್ಕೃತಿಯಂ ಎಂದು ಹೇಳಿದವನು ..?
ಚಂದ್ರರಾಜ
24) ಕನ್ನಡ ಮೊದಲನೆಯ ವ್ಯಾಕರಣ '
ಶಬ್ಧಸ್ಮೃತಿ ' ಮತ್ತು ಸಂಸ್ಕೃತದಲ್ಲಿ ಕನ್ನಡ ವ್ಯಾಕರಣ
" ಕರ್ಣಾಟಕ ಭಾಷಾಭೂಷಣ " ಬರೆದ ಕವಿ ಯಾರು .?
2ನೇ ನಾಗವರ್ಮ
25) ಆಗಮ ಲೌಕಿಕ ವಿರೋಧಮಂ ಕಳೆದು , ಸಾರಾಂಶಮಂ
ಕೊಂಡಾ ಹಲವು
ಮತಂಗಳನೊಂದು ಮಾಡಿ ಬರೆದ ಕಾವ್ಯ
ಯಾವುದು..?
ಮದನ ತಿಲಕ
26) 24ನೇ ತೀರ್ಥಕರ ಮಹಾವೀರನ ಕುರಿತು
ಚಂಪೂ ಕಾವ್ಯ ಬರೆದ ಕವಿ ಯಾರು,?
2ನೇ ನಾಗವರ್ಮ -ವರ್ಧಮಾನ ಪುರಾಣ
27) ಕವಿರಾಜ ಮಾರ್ಗದಲ್ಲಿ ಪ್ರಾಸಾಕ್ಷರವನ್ನು ಹೀಗೆ
ಕರೆಯಲಾಗಿದೆ..?
ಶಬ್ದಾಲಂಕಾರ
28) ಸುಭಟರ್ಕಳ್ ,ಕವಿಗಳ್ ,ಸುಪ್ರಭುಗಳ್ ಎಂದು
ವರ್ಣಿಸುವುದಕ್ಕೆ ಕವಿರಾಜಮಾರ್ಗದ ಪ್ರಕಾರ ಯಾವುದು,?
ಬಹುವಿಶೇಷಣ
29) ಅಕ್ಷರ ಗಣ ಕನ್ನಡಕ್ಕೆ ಯಾವ ಭಾಷೆಯ
ಕೊಡುಗೆ ಯಾಗಿದೆ .?
ಸಂಸ್ಕೃತ
30) ಪ್ರಾಸಾಕ್ಷರವು ವಿಸರ್ಗದಿಂದ ಕೊಡಿದ್ದರೆ...?
ಅಜಪ್ರಾಸ

    

No comments:

Post a Comment