Monday, 15 October 2018

General knowledge

1) "ಎಲ್ಲರ ಜೊತೆ ಎಲ್ಲರ ವಿಕಾಸ" ಇದು ಯಾವ ಆಯೋಗದ ಗುರಿ?
* ನೀತಿ ಆಯೋಗದ.

2) ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಅವಲಂಬಿತರಿಗೆ ಉಚಿತ ಚಿಕಿತ್ಸೆ ಒದಗಿಸುವ ಯೋಜನೆ ಯಾವುದು?
* ಜ್ಯೋತಿ ಸಂಜೀವಿನಿ ಯೋಜನೆ.

3) ಇಂದ್ರಧನುಷ್ ಯೋಜನೆ ಉದ್ಘಾಟನೆಯಾದದ್ದು ಯಾವಾಗ? * ಡಿಸೆಂಬರ್ 25, 2014.

4) "ಮೆಸೆಂಜರ್ ನೌಕೆ"ಯನ್ನು ಉಡಾಯಿಸಿದ ರಾಷ್ಟ್ರ ಯಾವುದು?
* ಅಮೇರಿಕಾ.

5) ಬೇಟಿ ಬಚಾವೋ ಭೇಟಿ ಪಡಾವೋ ಯೋಜನೆಯನ್ನು ಯಾವ ರಾಜ್ಯದಲ್ಲಿ ಉದ್ಘಾಟಿಸಲಾಯಿತು?
* ಹರ್ಯಾಣಾ.

6) "ಪ್ರವಾಸಿ ಭಾರತೀಯ ದಿನ"ವನ್ನು ಯಾವಾಗ ಆಚರಿಸಲಾಗುತ್ತದೆ?
* ಜನವರಿ 9.

7) "ಚಾರ್ಲಿ ಹೆಬ್ಡೋ" ಯಾವ ದೇಶದ ನಿಯತಕಾಲಿಕೆ?
* ಫ್ರಾನ್ಸ್.

8) ಇತ್ತೀಚೆಗೆ ನಿಧನರಾದ 'ಸಿಂಗಾಪುರದ ನಿರ್ಮಾತೃ' ಯಾರು?
* ಲೀ ಕುವಾನ್ ಯು.

9) ಅಮಿತಾಬ್ ಕಾಂತ್ ಯಾರು?
* ನೀತಿ ಆಯೋಗದ ನೂತನ ಸಿಇಒ.

10) ಇತ್ತೀಚೆಗೆ ಅಸಾಮಾನ್ಯ ಜಾಗತಿಕ ನಾಯಕ ಪ್ರಶಸ್ತಿ ಪಡೆದವರು ಯಾರು?
* ರಾಷ್ಟ್ರಪತಿ ಪ್ರಣಬ್ ಮುಖರ್ಜಿ.

11) ದೇಶದ ನಾಲ್ಕನೇ ಕೇಬಲ್ ಸೇತುವೆ ಯಾವುದು?
* ಅಟಲ್ ಸೇತುವೆ. (ಜಮ್ಮು ಮತ್ತು ಕಾಶ್ಮೀರ).

12) ಎಂ.ಜಿ.ಮೆಹ್ತಾ ಮಾನವ ಹಕ್ಕುಗಳ ಪ್ರಶಸ್ತಿಗೆ ಭಾಜನರಾದವರು ಯಾರು?
* ಅರುಣಿಮಾ ಸಿನ್ಹಾ.

13) ಅಸ್ಸಾಂನ ಯಾವ ಸರೋವರದಲ್ಲಿ ಆಮೆಗಳ 3 ನೇ ಜಾತ್ರೆ ನಡೆಯಿತು?
* ಹಜಾಂಗ್ ಸರೋವರದಲ್ಲಿ.

14) ಏಷ್ಯಾದ ಅತಿದೊಡ್ಡ ಸಾಹಿತ್ಯ ಉತ್ಸವ ಯಾವುದು?
* ಜೈಪುರ ಉತ್ಸವ.

15) "ಆಪರೇಶನ್ ಮೈತ್ರಿ" ಯಾವುದಕ್ಕೆ ಸಂಬಂಧಿಸಿದೆ?
* ನೇಪಾಳದ ಭೂಕಂಪನದ ಪರಿಹಾರ ಮತ್ತು ನೆರವು ಕಾರ್ಯಕ್ಕೆ.

16) ಭಾರತದ ನಂ.1 ಶ್ರೀಮಂತ ಯಾರು?
* ಮುಖೇಶ್ ಅಂಬಾನಿ.

17) ಇತ್ತೀಚೆಗೆ ಆರ್ಥಿಕ ಬಿಕ್ಕಟ್ಟು ಎದುರಿಸಿದ ರಾಷ್ಟ್ರ ಯಾವುದು?
* ಗ್ರೀಸ್.

18) ಭಾರತ ಇತ್ತೀಚೆಗೆ ಯಾವ ರೋಗದಿಂದ ಮುಕ್ತ ದೇಶವಾಗಿದೆ?
* ಧರ್ನುವಾಯು.

19) ಒಡಿಶಾದ ಯಾವ ದ್ವೀಪಕ್ಕೆ 'ಕಲಾಂ ಐಲ್ಯಾಂಡ್" ಎಂದು ಹೆಸರಿಡಲು ಕೇಂದ್ರ ಸರ್ಕಾರ ಚಿಂತನೆ ಮಾಡಿದೆ?
* ವೀಲ್ಹರ್.

20) 16 ನೇ ವಿಶ್ವ ಸಂಸ್ಕೃತ ಸಮ್ಮೇಳನ ಯಾವ ರಾಷ್ಟ್ರದಲ್ಲಿ ನಡೆಯಿತು?
* ಥೈಲ್ಯಾಂಡ್(ಬ್ಯಾಂಕಾಕ್).

21) ಆಯ್ ಎಫ್ ಎಸ್ ಗೆ ಆಯ್ಕೆಯಾದ ಮೊದಲ ದೃಷ್ಠಿಹೀನ ಮಹಿಳೆ ಯಾರು?
* ಎನ್.ಎಲ್.ಬೈನೋ.

22) "ವ್ಯಾಪಂ ಹಗರಣ" ಇತ್ತೀಚೆಗೆ ಯಾವ ರಾಜ್ಯದಲ್ಲಿ ಸುದ್ದಿಯಲ್ಲಿತ್ತು?
* ಮಧ್ಯಪ್ರದೇಶ.

23) ಡಾ.ಸಿದ್ದಲಿಂಗಯ್ಯನವರು  ಎಷ್ಟನೇ ಸಮ್ಮೇಳನದ ಅಧ್ಯಕ್ಷರಾಗಿದ್ದರು?
* 81.

24) ದೇಶದಲ್ಲಿ ಅತಿ ಸ್ವಚ್ಛ ನಗರ ಯಾವುದು?
* ಮೈಸೂರು.

25) 2015, ಮಾರ್ಚ್ 22 ವಿಶ್ವ ಜಲ ದಿನದ ಧ್ಯೇಯವಾಕ್ಯವೇನು?
* ಜಲ ಮತ್ತು ಸುಸ್ಥಿರ ಅಭಿವೃದ್ಧಿ.

26) 2015 ಇತ್ತೀಚೆಗೆ ಹರಿಯಾಣ ಸರ್ಕಾರದ ರಾಯಬಾರಿಯಾಗಿ ಆಯ್ಕೆಯಾದವರು ಯಾರು?
* ಬಾಬಾ ರಾಮದೇವ.

27) 2015 ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ರಾಯಬಾರಿಯಾಗಿ ಆಯ್ಕೆಯಾಗಿದ್ದವರು ಯಾರು?
* ಸಚಿನ್ ತೆಂಡೂಲ್ಕರ್.

28) 35 ರಾಷ್ಟೀಯ ಕ್ರೀಡಾಕೂಟ ಯಾವ ರಾಜ್ಯದಲ್ಲಿ ನಡೆಯಿತು?
* ಕೇರಳ.

29) ಐಪಿಎಲ್ 2015 ರ ರನ್ನರ್ ಅಪ್ ತಂಡ ಯಾವುದು?
* ಚನ್ನೈ ಸೂಪರ್ ಕಿಂಗ್ಸ್.

30) ಕರ್ನಾಟಕ ರಾಜ್ಯದ ನೂತನ ಅಡ್ವೋಕೇಟ್ ಜನರಲ್ ಯಾರು?
* ಎಂ.ಆರ್.ನಾಯಕ್.

31) ಏಷ್ಯಾದ ಸ್ವಚ್ಛ ಗ್ರಾಮ ಯಾವುದು?
* ಮಾವ್ ಲ್ಯಾನ್ನಾಂಗ್ (ಮೇಘಾಲಯ).

32) ಸುಪ್ರೀಂ ಕೋರ್ಟ್ ನ 43 ನೇ ಮುಖ್ಯನ್ಯಾಯಾಧೀಶರು ಯಾರು?
* ಟಿ.ಎಸ್.ಠಾಕೂರ್.

33) ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಯಾರು?
* ಸೈಯದ್ ಅಕ್ಬರುದ್ದೀನ್.

34) ಏಷ್ಯಾದ ಅತಿದೊಡ್ಡ ನೆಲದಡಿ ರೈಲು ನಿಲ್ದಾಣ ಯಾವ ರಾಷ್ಟ್ರದಲ್ಲಿ ಆರಂಭಗೊಂಡಿದೆ?
* ಚೀನಾ.

35) ಭಾರತದಲ್ಲಿ 2015 ರವರೆಗೆ ಎಷ್ಟು ಯುನೆಸ್ಕೋ ಪಾರಂಪರಿಕ ತಾಣಗಳು ಇದ್ದವು?
* 32.

36) 2015ಇತ್ತೀಚೆಗೆ ವಿಶ್ವದ ಅತಿ ತೂಕದ ವ್ಯಕ್ತಿ ಮರಣ ಹೊಂದಿದ.ಹಾಗಾದರೆ ಆತನ ಹೆಸರೇನು?
* ಅಂಡ್ರೆಸ್ ಮೋರನೋ (ಮೆಕ್ಸಿಕೋ).

37) ದಕ್ಷಿಣ ಭಾರತದ ಅತಿ ಹೆಚ್ಚು ವಾಯು ಮಾಲಿನ್ಯ ನಗರ ಯಾವುದು?
* ಬೆಂಗಳೂರು.

38) ಪ್ರತಿ 2ನೇ ಭಾನುವಾರ ಯಾವ ಆಚರಣೆಯನ್ನು ಜಾರಿಗೆ ತರಲಾಗಿದೆ?
* ದಲಿತರ ದಿನ.

39) 2015 ಇತ್ತೀಚೆಗೆ ಪಾಕಿಸ್ತಾನ ಉಡಾಯಿಸಿದ ಖಂಡಾಂತರ ಕ್ಷಿಪಣಿಯ ಹೆಸರೇನು?
* ಶಾಹಿನ್ 1ಎ.

40)  "ಅಂತರರಾಷ್ಟ್ರೀಯ ವಲಸಿಗರ ದಿನ"ವನ್ನು ಯಾವಾಗ ಆಚರಿಸಲಾಗುತ್ತದೆ?
* ಡಿಸೆಂಬರ್ 18.

41) ಸ್ವಚ್ಛ ಭಾರತ ಅಭಿಯಾನಕ್ಕೆ ವಿಶ್ವಬ್ಯಾಂಕ್ ಎಷ್ಟು ಸಾವಿರ ಕೋಟಿ ಸಾಲ ನೀಡಲು ಒಪ್ಪಿಗೆ ಸೂಚಿಸಿದೆ?
* 10 ಸಾವಿರ ಕೋಟಿ.

42) ದೇಶದ ಮೊದಲ ಹೊಗೆ ಮುಕ್ತ ಗ್ರಾಮ ಯಾವುದು?
* ವೈಚಕೂರಹಳ್ಳಿ.

43) ಡಿಸೆಂಬರ್ 29 ರಂದು ಯಾವ ದಿನವನ್ನು ಆಚರಿಸಲಾಗುತ್ತದೆ?
* ವಿಶ್ವ ಮಾನವ ದಿನ.

44) 2015 ರ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತದ ಸ್ಥಾನವೇನು?
* 130.

45) 2015 ನೇ ಸಾಲಿನ ಮಿಸ್

ವರ್ಲ್ಡ್ ಯಾರು?
* ಮಿರಿಯಾ ಲಾಲಾಗುನಾ ರೋಯೊ.

46) 2015 ನೇ ಸಾಲಿನ ಮಿಸ್ ಯೂನಿವರ್ಸ್ ಯಾರು?
* ಪಿಯಾ ಅಲಾಂಜೊ ವುರ್ತ್ ಬಕ್

*

No comments:

Post a Comment